Home ಕರ್ನಾಟಕ ‘ಹೊಸ ನೇಮಕಾತಿ ಇಲ್ಲ’ ಒಳಮೀಸಲಾತಿ ಆಯೋಗ ವರದಿಯ ನಂತರ ನಿರ್ಧಾರ; ಸಿಎಂ ಸ್ಪಷ್ಟನೆ

‘ಹೊಸ ನೇಮಕಾತಿ ಇಲ್ಲ’ ಒಳಮೀಸಲಾತಿ ಆಯೋಗ ವರದಿಯ ನಂತರ ನಿರ್ಧಾರ; ಸಿಎಂ ಸ್ಪಷ್ಟನೆ

0
‘ಹೊಸ ನೇಮಕಾತಿ ಇಲ್ಲ’ ಒಳಮೀಸಲಾತಿ ಆಯೋಗ ವರದಿಯ ನಂತರ ನಿರ್ಧಾರ;  ಸಿಎಂ ಸ್ಪಷ್ಟನೆ

ಬೆಂಗಳೂರು, ಅಕ್ಟೋಬರ್ 29:ಒಳಮೀಸಲಾತಿ ಜಾರಿಗೊಳಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸದ್ಯ ಈ ಸಮಿತಿ ವರದಿ ಸಲ್ಲಿಸುವವರೆಗೂ ಯಾವುದೇ ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಆಯೋಗದ ವರದಿ ಬರುವವರೆಗೆ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಮಾತ್ರ ಸ್ಥಗಿತಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಏಕಸದಸ್ಯ ಪೀಠ ವರದಿ ಸಲ್ಲಿಸಲು ಮೂರು ತಿಂಗಳ ಗಡುವು ನೀಡಲಾಗಿದೆ ವರದಿ ಸಲ್ಲಿಕೆ ಆಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಯಾವುದೇ ಅಧಿಸೂಚನೆ ಹೊರಡಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here