ವೀರಾಪೂರ, ಫೆ.07: Zamzam ಪೌಂಡೇಷನ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ, ವೀರಾಪೂರ ಶಾಲೆಗೆ ವಿತರಿಸಿದ ₹50,000 ಮೌಲ್ಯದ ವಿಜ್ಞಾನ ಪ್ರಯೋಗಾಲಯ ವಸ್ತುಗಳ ಅನಾವರಣ ಮಾಡಲಾಯಿತು.
ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಾದ ಕ್ಷೇತ್ರಶಿಕ್ಷಣಾಧಿಕಾರಿ ಸಿ. ವಾಯ. ತುಬಾಕದ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನ್ನವರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಪಾಟೀಲ ಗುರುಗಳು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕೆ.ಆರ್. ಇಟ್ನಾಳ , SDMC ಅಧ್ಯಕ್ಷ ಗಂಗಾಧರ ಶಿಂಗರಾಗಾಂವಿ ಸದಸ್ಯರಾದ ಬಸನಗೌಡ ಚಾಪಗಾಂವ, ಮತ್ತು ಅದೃಶ ಶಿದ್ರಾಮನಿ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.