spot_img
Monday, February 24, 2025
spot_imgspot_imgspot_imgspot_img
spot_img

Top 5 This Week

spot_img

Related Posts

‘ಮೈಕ್ರೋ ನಿಗ್ರಹಕ್ಕೆ ಸುಗ್ರೀವಾಜ್ಞೆ ನಿಶ್ಚಿತ’ ಮತ್ತೆ ಎಚ್ಚರಿಸಿದ ಸಚಿವ ಎಚ್‌ಕೆ ಪಾಟೀಲ್!

ಹುಬ್ಬಳ್ಳಿ, ಫೆಬ್ರವರಿ 02: ಕರ್ನಾಟಕದಲ್ಲಿ ಬಡವರಿಗೆ, ಶ್ರಮಿಕರಿಗೆ ಮಿತಿ ಮೀರಿ ಸಾಲ ನೀಡಿ, ಸಾಲಕ್ಕಾಗಿ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತರಲು ಮುಂದಾಗಿದೆ. ಆದರೆ ಇನ್ನೂ ಮಂಡನೆ ಆಗಿಲ್ಲ. ಈ ಬಗ್ಗೆ ಕಾನೂನು ಸಚಿವ ಎಚ್‌.ಕೆ.ಪಾಟೀಲ್ ಮಾತನಾಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.

ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಮೈಕ್ರೋ ಪೈನಾನ್ಸ್ ಕಂಪನಿ, ‌ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಇದರಿಂದ ಸಾವು, ನೋವು ಉಂಟಾಗಿದೆ. ಈಹಿನ್ನೆಲೆಯಲ್ಲಿ ಈ ಮೈಕ್ರೋ ಪೈನಾನ್ಸ್ ಹಾವಳಿ ತಡೆಗೆ ಈಗಾಗಲೇ ಸುಗ್ರೀವಾಜ್ಞೆ ಮಸೂದೆಯನ್ನ ತಯಾರು ಮಾಡಿ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದೆ.

ಬಡವರನ್ನ, ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದಂತೆ ಥಳಿಸಿ ಸಾಲ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಮೈಕ್ರೋಪೈನಾನ್ಸ್,‌ ಬಡ್ಡಿ ದಂಧೆಕೋರರಿಗೆ ಲಗಾಮು ಹಾಕಬೇಕಾಗಿದೆ. ಈ ಸಂಬಂಧ ಸುಗ್ರಿವಾಜ್ಞೆ ತಯಾರು ಮಾಡಲಾಗಿದೆ. ಓಂಬಡ್ಸ್ ಮನ್ ನೇಮಕ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಿ ನೀಡಲಾವುದು. ಜನರ ಭಾವನೆ ಹಾಗೂ ಬದಕುಕಿನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆ ನಾವು ಒಪ್ಪಲ್ಲ ಎಂದು ಅವರು ತಿಳಿಸಿದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles