
ನಾಗನೂರು, ಡಿಸೆಂಬರ್ 15: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ನಾಗನೂರ ಇದರ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಬಣ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಮಹಾಂತೇಶ ದೊಡ್ಡಗೌಡರ ಅವರು ತಮ್ಮ ಕಛೇರಿಯಲ್ಲಿ ಅಭಿನಂದಿಸಿದ್ದಾರೆ.
ಮಹಾಂತೇಶ ಗದಗ ಅರ್ಜುನ ಇಂಚಲ ಶಿವಲಿಂಗಪ್ಪ ತೋರಣಗಟ್ಟಿ ಶ್ರೀದೇವಿ ಸಿದ್ರಾಮ ಪರವಿನಾಯ್ಕರ ಸುರೇಖಾ ಜಯಾನಂದ ತಲ್ಲೂರ ಬಸಪ್ಪ ಗಂಗಪ್ಪ ಪಡೆಣ್ಣವರಲಕ್ಷ್ಮಣ ಗಂಗಪ್ಪ ಖಾನಣ್ಣವರವೀರನಗೌಡ ರಾಯನಗೌಡ ಶಿವನಾಯ್ಕರ ಒಟ್ಟು 12 ಸ್ಥಾನಗಳಲ್ಲಿ 08 ಸ್ಥಾನ ಬಿಜೆಪಿ ಮಡಿಲಿಗೆ ಬಿದ್ದಿದ್ದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮೇಲುಗೈ ಸಾಧಿಸಿದ್ದಾರೆ.

ಗ್ರಾಮದ ಮಾಜಿ ತಾ.ಪಂ ಸದಸ್ಯರಾದ ಬಾಬಾಗೌಡ ಶಿವನಾಯ್ಕರ ಇವರ ಮುಂದಾಳತ್ವದಲ್ಲಿ ಮಾಜಿ ಶಾಸಕರ ಮಾರ್ಗಜರ್ಶನದ ಮೇರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ.ಕಾರ್ಯಕರ್ತರು ಅಭಿಮಾನಿಗಳು ಈ ವೇಳೆ ಸಂಭ್ರಮಿಸಿದರು.