Home ಸ್ಥಳೀಯ ಇವತ್ತು ಮಲಪ್ರಭಾ ಶುಗರ್ ಫ್ಯಾಕ್ಟರಿ ಬಾಯ್ಲರ್ ಪ್ರದೀಪನ| ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮ| ಮಠಾಧೀಶರು, ಗಣ್ಯರು ಭಾಗಿ!

ಇವತ್ತು ಮಲಪ್ರಭಾ ಶುಗರ್ ಫ್ಯಾಕ್ಟರಿ ಬಾಯ್ಲರ್ ಪ್ರದೀಪನ| ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮ| ಮಠಾಧೀಶರು, ಗಣ್ಯರು ಭಾಗಿ!

0
ಇವತ್ತು ಮಲಪ್ರಭಾ ಶುಗರ್ ಫ್ಯಾಕ್ಟರಿ ಬಾಯ್ಲರ್ ಪ್ರದೀಪನ| ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮ| ಮಠಾಧೀಶರು, ಗಣ್ಯರು ಭಾಗಿ!

ಚನ್ನಮ್ಮನ ಕಿತ್ತೂರು, ನವೆಂಬರ್ 03: ಸಮೀಪದ ಎಂ. ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಪ್ರಸಕ್ತ ವರ್ಷದ ಬಾಯ್ತರ ಪ್ರದೀಪನ ಹಾಗೂ ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮ ಇವತ್ತು ಬೆಳಿಗ್ಗೆ 9.45 ಗಂಟೆಗೆ ನೆರೆವೇರಲಿದೆ.

ನಾಗನೂರ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಕಾದರವಳ್ಳಿ ಸಿಮೀಮಠದ ಡಾ. ಪಾಲಾಕ್ಷ ಶಿವಯೋಗೀಶ್ವರರು, ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಕಿತ್ತೂರು ರಾಜಗುರು ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು, ಕಾದರವಳ್ಳಿ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಪ್ರದೀಪನ ಕಾರ್ಯವನ್ನು ನೆರವೇರಿಸಲಿದ್ದಾರೆ.

ಕಾರಖಾನೆಯ ಎಲ್ಲ ಸಿಬ್ಬಂದಿ, ಆಡಳಿತ ಮಂಡಳಿ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here